ಈ ವರ್ಷ ಆರಂಭದಿಂದಲೂ ತಣ್ಣಗಿದ್ದ ಸ್ಯಾಂಡಲ್ವುಡ್ ಮುಂದಿನ ತಿಂಗಳಿಂದ ಸದ್ದು ಮಾಡುವ ಹಾಗೆ ಕಾಣಿಸುತ್ತಿದೆ. 'ಭೀಮ'ನಿಂದ ಬಾಕ್ಸಾಫೀಸ್ ಬೂಮ್ ಬೂಮ್ ಆಗುವ ಎಲ್ಲಾ ಸಾಧ್ಯತೆಗಳು ಇವೆ. ದುನಿಯಾ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿ, ನಿರ್ದೇಶಿಸಿರುವ ಈ ಸಿನಿಮಾ ಬಿಡುಗಡೆಗೆ ಸನಿಹದಲ್ಲಿದೆ. ಈ ಕಾರಣಕ್ಕೆ ದುನಿಯಾ ವಿಜಯ್ ಭರ್ಜರಿಯಾಗಿ ಪ್ರಚಾರವನ್ನು ಆರಂಭಿಸಿದ್ದಾರೆ.
ರಾಮನಗರದಲ್ಲಿ ನಡೆದ ಚಾಮುಂಡಿ ಉತ್ಸವದಲ್ಲಿ ದುನಿಯಾ ವಿಜಯ್ ಭಾಗಿಯಾಗಿದ್ದರು. ಈ ವೇದಿಕೆಯಲ್ಲಿ 'ಭೀಮ' ಸಿನಿಮಾದ ಪ್ರಚಾರ ಮಾಡುವುದಕ್ಕೆ ವಿಜಯ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ದುನಿಯಾ ವಿಜಯ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಡುವಿನ ವೇಳೆ ಅಣ್ಣಾವ್ರು ಹಾಗೂ ಪುನೀತ್ ರಾಜ್ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ.